ಬೆಸೆಯಬೇಡಿ ಕವಿತೆ-ಕವಿಯ ನಡುವೆ ನಂಟು
ಕವಿತೆ ಬರಿಯ ಕಾಲ್ಪನಿಕ ಭಾವನೆಗಳ ಗಂಟು:
ಎಲ್ಲಾ ಕವಿತೆಗಳಲೂ ಕವಿಯನೇ ಕಂಡೀರಾದರೆ
ಕವಿಯ ಜೀವನ ದುಸ್ತರ, ಓದುಗರಿಗೂ ತೊಂದರೆ!
ಬೆಸೆಯಬೇಡಿ ಕವಿತೆ-ಕವಿಯ ನಡುವೆ ನಂಟು
ಕವಿತೆ ಬರಿಯ ಕಾಲ್ಪನಿಕ ಭಾವನೆಗಳ ಗಂಟು:
ಎಲ್ಲಾ ಕವಿತೆಗಳಲೂ ಕವಿಯನೇ ಕಂಡೀರಾದರೆ
ಕವಿಯ ಜೀವನ ದುಸ್ತರ, ಓದುಗರಿಗೂ ತೊಂದರೆ!
ಸಖೀ,
ನೋಡು ಈ ಬೇಸಿಗೆಯಲ್ಲಿ ಬಿರುಕುಬಿಡುತ್ತಿವೆ ಈ ಅಧರಗಳು
ಬರಪೀಡಿತ ಪ್ರದೇಶಗಳಲ್ಲಿ ಬಿರುಕುಬಿಡುವಂತೆ ಹೊಲಗಳು;
ಬಿರುಕುಗಳ ಮುಚ್ಚಲು ಧೈರ್ಯ ನಿನಗಲ್ಲದಿನ್ನಾರಿಗಿದೆಯಂತೆ
ಸುರಿ ಜೇನ, ಕೃಪೆದೋರಿ ವರುಣ, ಮಳೆಯ ಸುರಿಸುವಂತೆ!
ನನ್ನೀ ಮನದಲ್ಲಿನ
ಪ್ರಶಾಂತ ಕೊಳಕ್ಕೆ
ಅಸಂಬದ್ಧವಾದ
ವಿಷಯವೊಂದನ್ನು
ನಾನೆಸೆದು ಕೂತೆ
ಈ ಮನದಲ್ಲೆಲ್ಲಾ
ಕಿರಿಕಿರಿ, ದಿನವಿಡೀ
ಶಾಂತಿಯ ಕೊರತೆ!
ಈಗ ಹಾಗಲ್ಲ ನೋಡು
ನಮ್ಮ ನಡುವೆ ಇರುವ
ನಮ್ಮಂಥವನೇ ನಮ್ಮ
ಮುಗ್ಧ ಹೆಣ್ಮಕ್ಕಳಿಗೆ ಸಿಹಿ
ನೀಡಿ ಮರುಳುಗೊಳಿಸಿ
ತಾನು ರಾಕ್ಷಸನೆಂದು
ಸಾಬೀತುಗೊಳಿಸುತ್ತಾನೆ
ಗಂಟೆ ಒಂದೆರಡರಲ್ಲಿ!
“ಸಖೀ,
ನನ್ನ ಮನದ
ಮಾತುಗಳಿಗೆ
ಸದಾ ಕಿವಿಯಾಗಿ
ಇರುವ ನೀನು
ಎಂದೂ ಏನನ್ನೂ
ನುಡಿಯುವುದಿಲ್ಲ
ಏಕೆಂಬುದೇ ನನ್ನ
ಓದುಗರ ಪ್ರಶ್ನೆ”;
“ನೀನು ಸದಾ ಇಲ್ಲಿ
ಬರೆಯುತ್ತಿರುವುದು
ನನ್ನ ಮನದೊಳಗಿನ
ನಿನ್ನ ಮನದ
ಮಾತನ್ನೇ ಎಂದು
ಅರಿತರಾದರೆ
ಆ ಓದುಗರೆಂದೂ
ಕೇಳರೀ ಪ್ರಶ್ನೆ!”
ಸಖೀ,
ಭಾವನಾತ್ಮಕವಾಗಿ
ಬಂಧಿಸದ
ಬಂಧ
ಸಂಬಂಧಗಳು
ನೂರಿದ್ದರೇನು?
ನನ್ನ
ಮನವನರಿತು
ಮನದೊಳಗೆ
ಮನೆ
ಮಾಡಿರುವ
ನೀನಿಲ್ಲವೇನು
ನಿನಗೆ
ನಾನಿಲ್ಲವೇನು?
ಕಟ್ಟಿಹಾಕಿ ಸಾಕಿದರೂ ನಾವು ಆಕಳನ್ನು
ನೀಡುವುದದು ನಮಗೆ ಸದಾ ಹಾಲನ್ನು
ನೀನು ನನ್ನನ್ನು ಅದೆಷ್ಟೇ ತಡೆದರೂ
ಮುಂದುವರಿಸುವೆ ಬರೆಯುವುದನ್ನು;
ನಿನ್ನ ಇಷ್ಟಾನಿಷ್ಟಗಳ ಗೊಡವೆ ಇಲ್ಲ
ನನಗಿಲ್ಲವೇ ಇಲ್ಲ ಅವುಗಳ ಅಗತ್ಯ
ನಿನ್ನ ಆಯ್ಕೆಗೆ ಬಿಡುವೆ ಆರಿಸಿಕೊಳ್ಳು
ನಿನಗೆ ಯಾವುದನಿಸುವುದೋ ಪಥ್ಯ!