ಹುತಾತ್ಮರಾಗಲು!

ಸಖೀ,
ದೇಶಕ್ಕಾಗಿ ಬಲಿಯಾಗುವುದಕ್ಕೂ ಅದೃಷ್ಟವಿರಬೇಕು,
ಅದನ್ನು ನಾವು ಮೊದಲೇ ಬರೆಸಿಕೊಂಡೇ ಬಂದಿರಬೇಕು,

ಬಲಿಯಾದವರನ್ನಷ್ಟೇ ಕೊಂಚಕಾಲ ಸುದ್ದಿಯಾಗಿಸುತ್ತಾರೆ,
ನಾಡಿನ ಉದ್ದಗಲಕ್ಕೂ ಜನರೆಲ್ಲರೂ ಕೊಂಡಾಡುತ್ತಿರುತ್ತಾರೆ,

ಬಲಿಯಾಗದೇ ಉಳಿದವರನ್ನು ಇಲ್ಲೆಲ್ಲರೂ ನಿರ್ಲಕ್ಷಿಸುತ್ತಾರೆ,
ಅವರನ್ನು ಪಿಂಚಣಿಗಾಗಿ ವರುಷಗಟ್ಟಳೆ ಧರಣಿ ಕೂರಿಸುತ್ತಾರೆ!

‪#‎ಆಸುಮನ‬

ತಮ್ಮ ಪ್ರತಿಕ್ರಿಯೆ ನೀಡಿ.