ದೇವಾ, ಧರ್ಮ ನಶಿಸಿ ಹೋದಾಗ ಮತ್ತೆ ಸಂಭವಿಸುತ್ತೇನೆ, ಮತ್ತೆ ನಾನು ಅವತಾರ ಎತ್ತಿ ಬರುವೆನೆಂದವನು ನೀನು. ನಿನ್ನ ಅವತಾರಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲವೇ?
ಈ ಭರತಭೂಮಿಯಲ್ಲಿ ಇನ್ನೂ ಏನೇನಾಗಬೇಕಿದೆ? ಭ್ರಷ್ಟಾಚಾರ ಪ್ರತಿಯೊಬ್ಬರ ರಕ್ತದ ಕಣಗಳಲ್ಲಿ ತುಂಬಿದೆ ಅತ್ಯಾಚಾರವೇ ಈಗ ಈ ಸಮಾಜದ ದಿನಚರಿಯಾಗಿದೆ ಅಧರ್ಮವೇ ಧರ್ಮದ ರೂಪ ತಾಳಿ ನಮ್ಮ ಕಣ್ಣುಕಟ್ಟುತ್ತಿದೆ.
ಇನ್ನೂ ಏಕೆ ಈ ಮೌನ?
ಇನ್ನಾದರೂ ನೀನು ಬರಬಾರದೇ ದೇವಾ?
ದೇವರು ಮತ್ತು ಮಾನವನ ನಡುವಿನ ಸಂಬಂಧದಲ್ಲಿ, ಮಾನವನ ಈ ನಡತೆಯೇ ಪ್ರಮುಖ ನಡತೆಯಲ್ಲವೇ?
ನಮಗೇನಾಗುತ್ತಿದೆ ಅನ್ನುವುದನ್ನು ಸರ್ವಂತರ್ಯಾಮಿಯ ಸರ್ವವನ್ನೂ ಅರಿತಿರುವ, ಆತನ ಅರಿವಿಗೆ ತರುವ ಸತತ ಪ್ರಯತ್ನದಲ್ಲೇ ಇರುತ್ತೇವೆ ಅಲ್ಲವೇ ನಾವು?
ಆತನ ಅರಿವಿನ ಮಟ್ಟವನ್ನು ನಮ್ಮರಿವಿನ ಮಟ್ಟಕ್ಕಿಂತಲೂ ಕೆಳಗಿಳಿಸಿ ಗೋಗರೆಯುತ್ತೇವೆ ನಾವು.
ಆದರೆ ಇನ್ನೊಂದು ಕೋನದಿಂದ ನೋಡಿದರೆ, ಮಗು ನೊಂದಾಗ ತನ್ನ ಮಾತಾಪಿತರನ್ನೇ ಕರೆದು, ಗೋಗರೆಯಬೇಕಲ್ಲವೇ?
ಹಾಗಾಗಿ ಆತನಿಗೇ ನನ್ನ ಮೊರೆ. ಬಾರೋ, ಬಂದು ಬದಲಾವಣೆಯ ತಾರೋ ದೇವಾ, ನನ್ನೊಳಗೂ, ನಮ್ಮವರೊಳಗೂ, ಹೊರಗೂ.