ಸಖೀ,
ಕೆಲವು ಸಂಬಂಧಗಳು ಕೈಜಾರಿಹೋಗುತ್ತಿವೆ
ಅನ್ನುವುದರ ಅರಿವು ನಮಗಾಗುತ್ತಿರುತ್ತದೆ,
ಅದಕ್ಕೆ ನಾಳೆ ನಮ್ಮನ್ನೇ ಹೊಣೆಗಾರರನ್ನಾಗಿ
ಮಾಡಬಹುದೆಂಬ ಅರಿವೂ ನಮಗಿರುತ್ತದೆ;
ಆದರೇನು ಮಾಡೋಣ ಹೇಳು, ಅನುಮಾನ
ಪೂರ್ವಗ್ರಹಗಳೆಲ್ಲಾ ಬಲಿಷ್ಟಗೊಂಡ ಹಾಗಿವೆ,
ನಂಬಿಕೆ ದುರ್ಬಲಗೊಂಡಾಗ ಪ್ರಶ್ನೆಗಳೇ ನಮ್ಮ
ಮನದಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ಬಿಡುತ್ತವೆ!
ಏನು ಮಾಡಲಾಗದು! ನಮ್ಮ ಹಾಗೆ ನಾವಿದ್ದುಬಿಡುವುದು!
ಅಲ್ವೇ? 🙂
ಧನ್ಯವಾದಗಳು.