ಭಾವಾಭಿವ್ಯಕ್ತಿ!

08 ಜನ 17

​ಸಖೀ,

ಮಾತಾದರೇನು

ಮೌನವಾದರೇನು

ಭಾವಾಭಿವ್ಯಕ್ತಿ ಮುಖ್ಯ;

ತಮ್ಮ ವೈಫಲ್ಯಕ್ಕೆ

ಅನ್ಯರನು ದೂರಿದರೆ

ಮುರಿದೀತು ನಡುವಿನ ಸಖ್ಯ!

#ಆಸುಮನ


ಸಂಯಮ!

08 ಜನ 17

​ಸಖೀ,

ಸಂಯಮ ಕಾಯ್ದುಕೊಳ್ಳಿ

ಸಂಯಮ ಕಾಯ್ದುಕೊಳ್ಳಿ

ಎನ್ನುತ್ತಿರುವವರೇ ಎಲ್ಲರೂ;
ಅಂಥ ತಪಸ್ವಿ ವಿಶ್ವಾಮಿತ್ರನೇ

ಸೋತು ಮೈಮರೆತಿದ್ದನಂತೆ

ಇನ್ನು ಎಲ್ಲಿ ಈ ಹುಡುಗರು?
ಕಡಿವಾಣ ಹಾಕಲೇಬೇಕು

ಬೇಕಾಬಿಟ್ಟಿ ಬಾಳುವುದಕ್ಕೆ

ಹುಡುಗರೂ ಹುಡುಗಿಯರೂ!
#ಆಸುಮನ