ಮನುಜ ಮತ ಪ್ರತಿಪಾದಕನಾಗು!!!

30 ಏಪ್ರಿಲ್ 09

ಈಗ ಅರ್ಧ ಘಂಟೆಗೆ ಮೊದಲು ನನ್ನ ಅನುಜ ಆತ್ರಾಡಿ ಪೃಥಿರಾಜ್ ಹೆಗ್ಡೆಯಿಂದ ಈ ಸಂದೇಶ ಬಂತು:

“ನನಗೆ ಯಾರೂ ನಾಯಕರಿಲ್ಲ,
ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ;
ನನಗೆ ಯಾವ ಪಕ್ಷವೂ ಇಲ್ಲ,
ಆದರೆ, ನನಗೆ ಜೈಕಾರ ಹಾಕುವವರ ಕೈಯಲ್ಲಿ ಬಿಜೆಪಿಯ ಧ್ವಜವ ಕಂಡೆ;
ನನಗೆ ಯಾವ ಮತವೂ ಇಲ್ಲ,
ಆದರೆ, ಕನಸಲ್ಲಿ ಶಿವ ಬಂದು ನಿನ್ನ ಧರ್ಮ ಯಾವುದು ಎಂದಾಗ ಹಿಂದೂ ಎಂದೆ;
ನಾನು ದೇವರಲ್ಲಿ ಏನನ್ನೂ ಬೇಡುವುದಿಲ್ಲ,
ಆದರೆ, ಶಿವ ಕನಸಲ್ಲಿ ಬಂದು ಕೇಳಿದಾಗ ಪುನರ್ಜನ್ಮ ಇದ್ದರೆ ಹಿಂದುವಾಗೇ ಹುಟ್ಟಿಸು ಅಂದೆ;
ತಾಯ್ನೆಲಕೆ, ತಾಯ್ನುಡಿಗೆ, ತಾಯ ರಕ್ತದ ಋಣಕೆ, ಬಿಜೆಪಿಯನ್ನಲ್ಲದೆ ಅನ್ಯ ರಾಜಕೀಯ ಪಕ್ಷವ ಕಾಣೆ!!!”

ಅದಕ್ಕೆ ನಾನು ಕಳುಹಿಸಿದ ಉತ್ತರ ಇಲ್ಲಿದೆ:

“ಮನುಜನಾಗು,
ಮನುಜ ಧರ್ಮೀಯನಾಗು,
ಮನುಜ ಮತ,
ವಿಶ್ವಮತದ
ಪ್ರತಿಪಾದಕನಾಗು.
ನೀನು ಇಂತಾದೊಡೆ,
ಮೋಕ್ಷ ನಿನಗಕ್ಕು
ನಿನ್ನ ಬಾಳು ನಾಕಕ್ಕೆ ದಾರಿಯಕ್ಕು,
ಇಲ್ಲವಾದೊಡೆ ಈ ನಿನ್ನ ಬದುಕು
ನರಕದ ರಹದಾರಿಯಕ್ಕು!!!”

(ಯಾವುದೇ ಪಕ್ಷ ಮತಗಳ ಬಗ್ಗೆ ಪೂರ್ವಗ್ರಹವಿಲ್ಲದೇ, ಓದುಗರೊಂದಿಗೆ ಇದನ್ನು ಹಂಚಿಕೊಳ್ಳುವ ಒಂದೇ ಉದ್ದೇಶದೊಂದಿಗೆ ಪ್ರಕಟಿಸುತ್ತಿದ್ದೇನೆ).