ಸುದ್ದಿಗಳಿಗೆ ಏನಂತೆ
ಬಂದು ಅಪ್ಪಳಿಸುತ್ತಾ
ಇರುತ್ತವೆ ಈ ಕಿವಿಗಳನ್ನು
ದಡಕ್ಕೆ ಬಂದಪ್ಪಳಿಸುವ
ಸಮುದ್ರದ ತೆರೆಗಳಂತೆ
ಎಲ್ಲೋ ಮಗುವೊಂದು
ಜನ್ಮ ತಾಳಿದ ಸಿಹಿ ಸುದ್ದಿ
ಇನ್ನೆಲ್ಲೋ ಆತ್ಮೀಯರಿಗಾದ
ಮಾತೃ ವಿಯೋಗದ ಸುದ್ದಿ
ಮನವಿಂದು ಮರೆತಂತಿದೆ
ಪ್ರತಿಸ್ಪಂದನದ ಪರಿಯನ್ನು
ಸ್ವೀಕರಿಸುತ್ತಾ ಸಾಗುತ್ತಿದೆ
ಬರುವೆಲ್ಲಾ ಸುದ್ದಿಗಳನ್ನೂ
ನೋವು ನಲಿವುಗಳಿಗೆಲ್ಲಾ
ಸ್ಪಂದಿಸದೇ ಇರುವುದೇಕೆ
ಬಿಡುವಿಲ್ಲದ ದಿನಚರಿಯಲ್ಲಿ
ಸದಾ ಮುಳುಗಿರುವುದೇಕೆ?
ಇದು ಬರಿ ನನ್ನೋರ್ವನ
ಅವಸ್ಥೆಯೇ ಹೇಳಿ ಸ್ನೇಹಿತರೇ
ತಮ್ಮಲ್ಲೂ ನನ್ನೀ ಅನಿಸಿಕೆಯ
ತನ್ನದೂ ಎಂಬವರು ಇಹರೇ?
Posted by ಆತ್ರಾಡಿ ಸುರೇಶ ಹೆಗ್ಡೆ