ಯಡಿಯೂರಪ್ಪನವರ ಅಧಿಕಾರದ ಅಂತ
ಕಾಣ ಬಯಸಿರುವಂತಿದೆ ನಮ್ಮ ಅನಂತ
ಇಲ್ಲವಾದರೆ ವಿಶ್ವೇಶ್ವರ ಭಟ್ಟರೇ ಇಂದೀಗ
ನೈಸ್ ಕತೆ ಯಾಕೆ ಬರೆಯಬೇಕಿತ್ತು ಅಂತ
ಅನಂತರು ಒಪ್ಪಿಗೆ ನೀಡದೇ ಭಟ್ಟರು ಕತೆ
ಬರೆದರೆಂದರೆ ನಂಬಲೇ ಆಗದು ನನ್ನಿಂದ
ಅನಂತರ ಜೊತೆಗೆ ದುಡಿದ ಆ ದಿನಗಳ
ಮರೆಯಲಾಗುವುದೇ ಹೇಳಿ ಈ ಭಟ್ಟರಿಂದ
ಹೊರಗಿನವರು ಎಷ್ಟು ಕಿರುಚಾಡಿದರೂ
ಯಡ್ಡಿ ಉಳಿದಿರಬಹುದು ಅಬಾಧಿತರಾಗಿ
ಕುರ್ಚಿಯೇ ಅಡಿಯಿಂದ ಸುಡತೊಡಗಿದರೆ
ಕೂತಿರಬಹುದೇ ಇನ್ನು ನಿರಾತಂಕವಾಗಿ
ಅಂತೂ ಇಂತೂ ಈ ನಿರ್ವೀರ್ಯ ಸರಕಾರ
ಪತನಗೊಳ್ಳುವ ಎಲ್ಲ ಸೂಚನೆಯೂ ಬಂದಿದೆ
ಆದರೆ ಆಸುಮನದೊಳಗೆ ಮುಂದೆ ಅದಿನ್ಯಾವ
ಸರ್ಕಾರ ಬರಬಹುದೆಂಬ ಭಯವೂ ಕಾಡಿದೆ!!!
***************************