ಇದು ಇಂದು ನಾನು ಹೊಸದಿಗಂತ ದಿನಪತ್ರಿಕೆಯಲ್ಲಿ ಓದಿದ ಲೇಖನ.
ತಾವುಗಳೂ ಓದಿ ಎಂಬ ಇಚ್ಛೆಯೊಂದಿಗೆ ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ:
ಸ್ಪಷ್ಟವಾಗಿಲ್ಲದಿದ್ದರೆ ಬರಹದ ಮೇಲೆ “ಕ್ಲಿಕ್” ಮಾಡಿ!
ನಮ್ಮ ಸರಕಾರಗಳು ಮಾಡಿದ
ಬಹುಮೂಲ್ಯ ಕೆಲಸವೆಂದರೆ
ಮಹಾತ್ಮ ಗಾಂಧಿಗೆ
ಭಾರತ ರತ್ನ ಪ್ರಶಸ್ತಿ
ಪ್ರದಾನ ಮಾಡದೇ ಇದ್ದುದು,
ಇಲ್ಲವಾಗಿದ್ದಲ್ಲಿ, ನೆಹರೂ,
ಇಂದಿರಾ, ಮಂಡೇಲಾ,
ಎಂಜಿಆರ್, ರಾಜೀವ ಗಾಂಧಿ,
ಲತಾರಿಗೆ, ಸರಿಸಮಾನರಾಗಿಯೇ,
ಮಹಾತ್ಮರು ಉಳಿದುಬಿಡುತ್ತಿದ್ದರು;
ನಮ್ಮ ಸರ್ಕಾರಗಳು ಮಾಡಿದ
ಅತೀ ಕೆಟ್ಟ ಕೆಲಸವೆಂದರೆ
ಹೆಚ್ಚಿನೆಲ್ಲಾ ನಗರಗಳಲ್ಲೂ
ರಸ್ತೆಗಳಿಗೆ ಮಹಾತ್ಮ ಗಾಂಧಿ ರಸ್ತೆ
ಎಂಬ ನಾಮಕರಣ ಮಾಡಿದುದು,
ಗಾಂಧಿ ತೋರಿದ ಹಾದಿಯಲ್ಲಿ
ನಡೆಯಬೇಕಾದ ಮಂದಿ ಈ
ರಸ್ತೆಗಳಲ್ಲೇ ಬೇಕಾದುದನ್ನೆಲ್ಲಾ
ಮಾಡಿ ಅದರಿಂದಲೇ ಒಳಗೊಳಗೇ
ತೃಪ್ತರಾಗಿ ಉಳಿಯುತಿಹರು!
**************
ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ
ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ
ಮರೆವು ಮನುಜನಿಗೆ ವರದಂತೆ
ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ
ಆ ಗಾಂಧಿ ಜನಿಸಿದ ನಾಡಿನಲ್ಲಿ
ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲಾ ಸದ್ಯಕ್ಕೀಗ ಇಲ್ಲಿ
ಗಾಂಧಿ ನೆಹರೂ ಅವರುಗಳನ್ನುಳಿದು
ಅನ್ಯರ ನೆನೆಸಿದರೆ ಈ ನಾಡಿನಲ್ಲಿ ಪಾಪವೆಂದೆನಿಸುವುದು
ಭಾರತರತ್ನನಾದ ಆರೋಪಿ ರಾಜೀವ ಗಾಂಧಿ
ನಾಡಿನ ಅನ್ಯ ವೀರ ಪುತ್ರರತ್ನರ ನೆನೆಯರು ನಮ್ಮ ಮಂದಿ
ಚಿತ್ರ ನಟರ ಜನ್ಮದಿನಕ್ಕೆ ಇಲ್ಲಿ ಮೆರವಣಿಗೆ
ವೀರಯೋಧರ ನೆನಪುಗಳು ಸೀಮಿತವಾಗಿವೆ ಬರವಣಿಗೆಗೆ
ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ
ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಬಾಳಲಾರ
ವೀರರ ನೆನಪಿನಲಿಂದು ಕಂಬನಿ ಮಿಡಿದು
ನಾಡಿಗಾಗಿ ಹೋರಾಡುವೆವೆನ್ನೋಣ ಸ್ವಾರ್ಥವನೆಲ್ಲಾ ತೊರೆದು!
************
ಇಂದು ಭಗತ್ ಸಿಂಗ್ ಜೀವಿಸಿದ್ದಿದ್ದರೆ ಆತನಿಗೆ ೧೦೩ ವರುಷ ತುಂಬುತ್ತಿತ್ತು!