ಸಖೀ,
ನೋವುಂಡವರ ಬಗ್ಗೆ ಬರೆದೂ ಬರೆದೂ ತಿಂದದ್ದದೆಷ್ಟೋ,
ಅದರಲ್ಲಿ ನೊವುಂಡವರಿಗೆ ಆಗಿರುವ ಲಾಭವಾದರದೆಷ್ಟೋ;
ಬರಿ ಅನುಕಂಪದ ಮಾತುಗಳನಾಡಿ ಮೆಚ್ಚುಗೆ ಗಳಿಸುವಾಟ,
ಸಹಾನುಭೂತಿ ಕಿಂಚಿತ್ತೂ ಇಲ್ಲ ಬರಿ ಸ್ವಾರ್ಥದ ಮೋಸದಾಟ;
ಅಲ್ಲಾರೋ ಶಾಂತಿಯ ಪತಾಕೆ ಹಾರಿಸಿದರೂ ಹೊಟ್ಟೆಉರಿ,
ಸಮಾಜದ ಧೃವೀಕರಣಕ್ಕೆ ಪಣತೊಟ್ಟಿದ್ದಾರೆ ಇದನ್ನು ಅರಿ!
#ಆಸುಮನ