ರವೀಂದ್ರನಾಥ ಟಾಗೋರರ ಮಾತುಗಳಿರಬೇಕು ಇವು (ಖಾತ್ರಿ ಇಲ್ಲ).
ಎಲ್ಲೋ ಓದಿದೆ. ಕನ್ನಡಕ್ಕೆ ಭಾವಾನುವಾದ ಮಾಡಲು ಯತ್ನಿಸಿದ್ದೇನೆ.
********************************************
ಎಲ್ಲೋ ಓದಿದೆ. ಕನ್ನಡಕ್ಕೆ ಭಾವಾನುವಾದ ಮಾಡಲು ಯತ್ನಿಸಿದ್ದೇನೆ.
********************************************
ಮಂದಿರಗಳಲ್ಲಿ ದೇವರ ಪಾದಗಳಿಗೆ ಹೂವುಗಳನ್ನು ಸಮರ್ಪಿಸದಿದ್ದರೂ ಪರವಾಗಿಲ್ಲ
ನಮ್ಮ ಮನೆ-ಮನಗಳಲ್ಲಿ ಪ್ರೀತಿಯ ಸುಗಂಧವು ಹರಡಿರುವಂತೆ ನೋಡಿಕೊಳ್ಳೋಣ
ಮಂದಿರಗಳಲ್ಲಿ ಇರುವ ಮೂರ್ತಿಗಳ ಮುಂದೆ ದೀಪಗಳನ್ನು ಹಚ್ಚದಿದ್ದರೂ ಪರವಾಗಿಲ್ಲ
ನಮ್ಮ ಹೃದಯಗಳೊಳಗಿರುವ ಪಾಪದ ಕತ್ತಲೆಯನ್ನು ಮೊದಲು ಹೋಗಲಾಡಿಸೋಣ
ಮಂದಿರಗಳಲ್ಲಿ ಇರುವ ದೇವರ ಮೂರ್ತಿಗಳಿಗೆ ತಲೆಬಾಗಿ ನಮಿಸದಿದ್ದರೂ ಪರವಾಗಿಲ್ಲ
ನಮ್ಮವರ ಮುಂದೆ ಮಾನವೀಯತೆಯಿಂದ ತಲೆಬಾಗುವುದನ್ನೆಂದೂ ಮರೆಯದಿರೋಣ
ಮಂದಿರಗಳಲ್ಲಿ ಮೂರ್ತಿಗಳ ಮುಂದೆ ಮಂಡಿಯೂರಿ ಪ್ರಾರ್ಥಿಸದೇ ಇದ್ದರೂ ಪರವಾಗಿಲ್ಲ
ಕಷ್ಟದಲ್ಲಿರುವವರನ್ನು ಮೇಲೆತ್ತಲಿಕ್ಕಾಗಿ ಬಗ್ಗುವುದನ್ನು ನಾವೆಲ್ಲಾ ಮೊದಲು ಆರಂಭಿಸೋಣ
ನಮ್ಮ ಪಾಪಕರ್ಮಗಳಿಗಾಗಿ ದೇವರ ಮುಂದೆ ನಿಂತು ಕ್ಷಮೆಯಾಚಿಸದಿದ್ದರೂ ಪರವಾಗಿಲ್ಲ
ತಪ್ಪುಗಳಿಗೆ ಯಾಚನಾಭಾವದೊಂದಿಗೆ ಕ್ಷಮೆಯಾಚಿಸುತ್ತಿರುವವರನ್ನು ಸದಾ ಕ್ಷಮಿಸೋಣ