ಸಖೀ,
ಅರಿಯಬೇಕು ನಾವು, ಈ ಜೀವನವೊಂದು ಪಯಣ
ಮುಂದುವರಿಯಲೇ ಬೇಕು ನಮ್ಮಲ್ಲಿಲ್ಲದಿದ್ದರೂ ತ್ರಾಣ
ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು
ಮುಂದೆ ನಮ್ಮ ಸಂಗವನೇ ತೊರೆದತ್ತ ತೆರಳುವವರು
ಅಲ್ಪ ಸಮಯದ ಸಂಗವು ಜೀವನವನೇ ಆವರಿಸಬಹುದು
ದೀರ್ಘಕಾಲದ ಸಂಗವನೂ ಅಲ್ಪದರಲೇ ಕಳೆಯಬಹುದು
ಹಾದಿಯಲಿ ಸಿಕ್ಕವರೆಲ್ಲಾ ನಮ್ಮ ಮನೆಗೆ ಬರುವವರಲ್ಲ
ಮನೆಗೆ ಬಂದವರೆಲ್ಲಾ ನಮ್ಮ ಮನದೊಳಗೆ ಬಾರರಲ್ಲಾ
ಮನದೊಳಗೆ ಬಂದವರನು ತೊರೆಯಲಾಗುವುದೇ ಇಲ್ಲ
ತೊರೆದು ತೆರಳಿದರೆ ಮತ್ತೆ ತಿರುಗಿ ಕರೆಯಲಾಗುವುದಿಲ್ಲ
ನಮ್ಮವರು ಎಂದರಿತರೆ ನಿಜದಿ ಇಲ್ಲಿ ನಮ್ಮವರೇ ಎಲ್ಲಾ
ಇಲ್ಲವೆಂದರಿತರೆ, ಸಖೀ, ಈ ಜಗದಿ ಯಾರಿಗಾರೂ ಇಲ್ಲ
************************************
ಧನ್ಯವಾದಗಳು ವಿಜಯ್ರಾಜ್
alpa samayada sangha jeevanavanE aavarisibiDabahudu….
deerghakaalada sanghavanoo alpadaralE kaLeyabahudu…
eshtu arthapoorana sir ee saalugaLu